Category Archives: National

ದೈವಸ್ಥಾನಗಳನ್ನು ಧಾರ್ಮಿಕ ಪರಿಷತ್‌ನಿಂದ ಹೊರಗಿಡಬೇಕು; ಮಾಜಿ ಸಚಿವ ಬಿ ರಮಾನಾಥ ರೈ

SavalTv.com ದೈವಸ್ಥಾನದಲ್ಲಿ ಭಂಡಾರ ಇಡುವುದು ಕಟ್ಟುಪಾಡಿಗೆ ವಿರೋಧವಾಗಿದ್ದು, ಎಲ್ಲರೂ ಅದನ್ನು ವಿರೋಧಿಸಬೇಕು. ದೈವಸ್ಥಾನದ ಭಂಡಾರದಲ್ಲಿ ಚಿನ್ನಾಭರಣಗಳಿರುತ್ತವೆ. ಅಮೂಲ್ಯ ವಸ್ತುಗಳಿರುತ್ತವೆ. ಅದನ್ನು ರಕ್ಷಣೆ ಮಾಡಬೇಕಾದರೆ ಅದು ಸಂಬಂಧಪಟ್ಟ ಭಂಡಾರ ಮನೆ, ಬೀಡುವಿನಲ್ಲಿಇರಬೇಕು. ದೈವಸ್ಥಾನದಲ್ಲಿ ಕಳ್ಳತನ ನಡೆದರೆ ಅದಕ್ಕೆ ಯಾರು ಹೊಣೆ ಎಂದು ಬಿ.ರಮಾನಾಥ ರೈ ಪ್ರಶ್ನಿಸಿದರು. ಮಂಗಳೂರು: ದೈವಸ್ಥಾನವನ್ನು ಎಂಡೋಮೆಂಟ್‌ನಿಂದ ಹೊರಗಿಡಬೇಕು. ಧಾರ್ಮಿಕ ಪರಿಷತ್‌ ಇದರಲ್ಲಿ ಮೂಗು ತೂರಿಸುವುದು ಸರಿಯಲ್ಲ. ಸಂಪ್ರದಾಯವನ್ನು ಮುರಿಯುವುದು ದೈವಾರಾಧನೆಯ ಕಟ್ಟುಪಾಡಿಗೆ ವಿರುದ್ಧವಾಗಿದೆ ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಹೇಳಿದರು.  ನಗರದ ಸಕ್ರ್ಯೂಟ್‌ ಹೌಸ್‌ನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ […]

ʼಪಾರ್ಲೆ-ಜಿʼ ಬಗ್ಗೆ ಹಬ್ಬಿದೆ ಹೀಗೊಂದು ವದಂತಿ.! ಬಿಸ್ಕೆಟ್‌ ಕೊಳ್ಳಲು ಅಂಗಡಿ ಮುಂದೆ ಸಾಲುಗಟ್ಟಿ ನಿಂತ ಜನ

ನಿಮ್ಮ ಮನೆಯಲ್ಲಿ ಐದು ಎಣ್ಣೆಗಳ ಮಿಶ್ರಣ ಮಾಡಿದ ದೀಪ ಹಚ್ಚದಿದ್ದರೆ ಕೇಡು ಸಂಭವಿಸುತ್ತದೆ, ಮಕ್ಕಳಿಗೆ ಕಣ್ಣಿಗೆ ಕಪ್ಪು ಬಣ್ಣ ಮೆತ್ತದಿದ್ದರೆ ಅವರ ಆರೋಗ್ಯ ಕ್ಷೀಣಿಸುತ್ತದೆ ಎಂಬ ವದಂತಿಗಳು ಕಾಡ್ಗಿಚ್ಚಿನಂತೆ ಕೆಲವೊಮ್ಮೆ ಹಬ್ಬುತ್ತಾ ನಮ್ಮ ಕುಟುಂಬಕ್ಕೂ ಬಡಿದಿರುತ್ತವೆ. ಆಗ ನಾವು ಕೂಡ ಯಾವುದೇ ವೈಜ್ಞಾನಿಕ ಆಧಾರಗಳಿಗೆ ತಲೆಕೆಡಿಸಿಕೊಳ್ಳದೆಯೇ ಅಂಧಶ್ರದ್ಧೆಯ ಮೂಲಕ ವದಂತಿಯನ್ನು ಆಚರಣೆ ಮಾಡಿರುತ್ತೇವೆ. ಯಾಕೆಂದರೆ, ಯಾರಿಗೂ ಕೇಡು ಸಂಭವಿಸುವುದು ಬೇಡವಾಗಿರುತ್ತದೆ. ಇದೇ ರೀತಿಯ ಬಾಯಿಂದ ಬಾಯಿಗೆ ಹಬ್ಬಿದ ಮಾತೊಂದು ಬಿಹಾರದಲ್ಲಿ ‘ಪಾರ್ಲೆ-ಜಿ ಬಿಸ್ಕೆಟ್‌ ‘ ಮಾರಾಟ ಹೆಚ್ಚಿಸಿದೆ! […]