ಜಿಎಸ್​ಐ ಹರಾಜಿಗಾಗಿ ಗುರುತಿಸಿದ 100ಜಿ4 ಖನಿಜ ಬ್ಲಾಕ್​ಗಳ ಹಸ್ತಾಂತರ; ಇಂದು ಮಧ್ಯಾಹ್ನ 3ಗಂಟೆಗೆ ಕಾರ್ಯಕ್ರಮ

ಭಾರತದ ಭೂವೈಜ್ಞಾನಿಕ ಸಮೀಕ್ಷೆ ಸಂಸ್ಥೆಯಿಂದ, ಹರಾಜಿಗೆ ಗುರುತಿಸಲ್ಪಟ್ಟ 100 ಜಿ4 ಸಾಮರ್ಥ್ಯ ಖನಿಜ ಬ್ಲಾಕ್​ಗಳನ್ನು ರಾಜ್ಯಗಳಿಗೆ ಹಸ್ತಾಂತರಿಸುವ ಕಾರ್ಯಕ್ರಮ (ಸೆಪ್ಟೆಂಬರ್​ 8) ಇಂದು ಮಧ್ಯಾಹ್ನ 3ಗಂಟೆಗೆ ದೆಹಲಿಯಲ್ಲಿ ನಡೆಯಲಿದೆ. ಈ ಕಾರ್ಯಕ್ರಮಲ್ಲಿ ಕೇಂದ್ರ ಗಣಿ, ಕಲ್ಲಿದ್ದಲು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್​ ಜೋಶಿ ಮತ್ತು ಕೇಂದ್ರ ಗಣಿ, ಕಲ್ಲಿದ್ದಲು ಮತ್ತು ರೈಲ್ವೆ ಇಲಾಖೆ ರಾಜ್ಯ ಸಚಿವ ರೌಸಾಹೇಬ್ ಪಾಟೀಲ್ ದನ್ವೆ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿಗಳ ಒಕ್ಕೂಟ (FICCI India) ಇಂದು ಲಿಂಕ್​ ಶೇರ್​ ಮಾಡಿದೆ. ಗಣಿ ಮತ್ತು ಖನಿಜಗಳ (ಅಭಿವೃದ್ಧಿ ಮತ್ತು ನಿಯಂತ್ರಣ) ಕಾಯಿದೆಯನ್ನು 2015ರಲ್ಲಿ ತಿದ್ದುಪಡಿ ಮಾಡಿದಾಗ, ಗಣಿಗಾರಿಕೆಗೆ ಪರವಾನಗಿ ನೀಡುವುದು, ಗುತ್ತಿಗೆ ಕೊಡುವುದು ಇತ್ಯಾದಿ ವಿಚಾರಗಳಲ್ಲಿ ಇನ್ನಷ್ಟು ಪಾರದರ್ಶಕತೆ ತರಲಾಯಿತು. ಹಾಗೇ, ಇದೇ ಕಾಯ್ದೆಯನ್ನು 2021ರ ಮಾರ್ಚ್​ನಲ್ಲಿ ಇನ್ನಷ್ಟು ಉದಾರೀಕರಣಗೊಳಿಸಲಾಯಿತು. ಈ ಖನಿಜ ಕ್ಷೇತ್ರ, ಗಣಿಗಾರಿಕೆಯಲ್ಲಿ ಹೂಡಿಕೆ ಮತ್ತು ಉದ್ಯೋಗಾವಕಾಶವನ್ನು ಹೆಚ್ಚಿಸಬೇಕು, ಗಣಿಗಾರಿಕಾ ವಲಯದಿಂದ ರಾಜ್ಯಗಳಿಗೆ ಆದಾಯದ ಪ್ರಮಾಣ ಹೆಚ್ಚಿಸಬೇಕು, ಉತ್ಪಾದನೆ ಅಧಿಕಗೊಳಿಸಬೇಕು, ಖನಿಜ ಸಂಪತ್ತಿನ ಗಣಿಗಳಲ್ಲಿ ಕಾಲಮಿತಿಯ ಕಾರ್ಯಾಚರಣೆ, ಗುತ್ತಿಗೆ ಬದಲಾವಣೆಯ ನಂತರವೂ ಗಣಿಕಾರ್ಯಾಚರಣೆ ಮುಂದುವರಿಕೆ, ಖನಿಜ ಸಂಪನ್ಮೂಲಗಳ ಪರಿಶೋಧನೆ ಮತ್ತು ಹರಾಜಿನ ವೇಗ ಹೆಚ್ಚಳ..ಇತ್ಯಾದಿ ಅಂಶಗಳನ್ನು ಈ ವರ್ಷದ ಎಂಎಂಡಿಆರ್​ ಕಾಯ್ದೆ ತಿದ್ದುಪಡಿ ಮಾಡುವಾಗ ಸೇರಿಸಲಾಗಿದೆ.

Leave a Reply

Your email address will not be published. Required fields are marked *